ವಿಕೇಂದ್ರೀಕೃತ ಪ್ರಜಾಪ್ರಭುತ್ವ ಗಟ್ಟಿಗೊಳಿಸುವಲ್ಲಿ ಆಂದೋಲನ ಅಂತರ್ಜಾಲ ತಾಣ ಬಿಡುಗಡೆ
ದಿನಾಂಕ: 19-12-2012
ಸ್ಥಳ: ಎನ್.ಜಿ.ಓ. ಸಭಾಭವನ, ಕುಂದಾಪುರ
ದಿನಾಂಕ: 19-12-2012
ಸ್ಥಳ: ಎನ್.ಜಿ.ಓ. ಸಭಾಭವನ, ಕುಂದಾಪುರ
ವಿಕೇಂದ್ರೀಕೃತ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವತ್ತ, ಎಲ್ಲಾ ಗ್ರಾಮ ಪಂಚಾಯತ್-ಗಳೊಂದಿಗೆ ಹಾಗೂ ಗ್ರಾಮ ಸಭಾ ಸದಸ್ಯರೊಂದಿಗೆ ಮಾಹಿತಿ ಹಂಚಿಕೊಳ್ಳುವ ಪ್ರಯತ್ನವಾಗಿ ದಿನಾಂಕ 19-12-2012ರಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ತನ್ನ ಈ ಅಂತರ್ಜಾಲ ತಾಣವನ್ನು ಬಿಡುಗಡೆಗೊಳಿಸಿತು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಎನ್.ಜಿ.ಓ. ಸಭಾಭವನದಲ್ಲಿ ಕರ್ನಾಟಕ ರಾಜ್ಯದ ಮೂರನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಅನುಷ್ಠಾನ ಪಡೆಯ ಕಾರ್ಯಾಧ್ಯಕ್ಷರಾದ ಶ್ರೀ ಎ.ಜಿ. ಕೊಡ್ಗಿಯವರು ಈ ಅಂತರ್ಜಾಲ ತಾಣವನ್ನು ಉದ್ಘಾಟಿಸಿ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಟ್ಟರು.